
ಯುಗಾದಿ
ಗೆಲ್ಲುವ ಚಲವಿತ್ತು
ಅಭಿಮಾನದ ಹರಿವಿತ್ತು
ಸಾಹಸ,ಸಾಧನೆ ತೋರಿದ ಧೋನಿಗೆ
ದೇವರೆ ನೀಡಿದ ಈ ಅಣಿಮುತ್ತು
ಜಯಹೋ ಇಂಡಿಯಾ
ಎದುರಾಳಿ ಯಾರಾದರೂ
ಹರಸುವಾಗ ಕೋಟಿ ಹೃದಯ
ನಿಮಗಿಲ್ಲ ಯಾರ ಭಯ
ಆ ಸ್ಥಳವೇ ಭಾರತದ ವಾಂಖೆಡೆ
ಜಗದ ಗಮನವೆಲ್ಲ ಅದರ ಕಡೆ
ಭಾಗ್ಯದ ಲಕ್ಷ್ಮಿ ನಮ್ಮಮ್ಮ
ಯುಗಾದಿಗೆ ಹರಸಿದಳು ಧೋನಿ ಪಡೆ
ಭಾಗ್ಯದ ಭಾರತದ ವಾಸಿಗಳೆಲ್ಲ
ಬಾಳಲಿ ಹರುಷದಿ ವರುಷವೆಲ್ಲ
ಧೋನಿ ಕಂಡ ಹರುಷದ ಯುಗಾದಿ
ಹರಡಲಿ ಹರುಷ ಜಗಕೆಲ್ಲ
ಅಭಿಮಾನದ ಹರಿವಿತ್ತು
ಸಾಹಸ,ಸಾಧನೆ ತೋರಿದ ಧೋನಿಗೆ
ದೇವರೆ ನೀಡಿದ ಈ ಅಣಿಮುತ್ತು
ಜಯಹೋ ಇಂಡಿಯಾ
ಎದುರಾಳಿ ಯಾರಾದರೂ
ಹರಸುವಾಗ ಕೋಟಿ ಹೃದಯ
ನಿಮಗಿಲ್ಲ ಯಾರ ಭಯ
ಆ ಸ್ಥಳವೇ ಭಾರತದ ವಾಂಖೆಡೆ
ಜಗದ ಗಮನವೆಲ್ಲ ಅದರ ಕಡೆ
ಭಾಗ್ಯದ ಲಕ್ಷ್ಮಿ ನಮ್ಮಮ್ಮ
ಯುಗಾದಿಗೆ ಹರಸಿದಳು ಧೋನಿ ಪಡೆ
ಭಾಗ್ಯದ ಭಾರತದ ವಾಸಿಗಳೆಲ್ಲ
ಬಾಳಲಿ ಹರುಷದಿ ವರುಷವೆಲ್ಲ
ಧೋನಿ ಕಂಡ ಹರುಷದ ಯುಗಾದಿ
ಹರಡಲಿ ಹರುಷ ಜಗಕೆಲ್ಲ
ಬಂತೊಂದು ಹೊಸ ವರುಷ
ಹಳೆದು ಬಸವಳಿದು
ಕಳೆದೋಯಿತೊಂದು ವರುಷ
ನಲಿದು ನೆಗೆನೆಗೆದು
ಬಂತೊಂದು ಹೊಸ ವರುಷ
ಅಂತೆ-ಕಂತೆಯೆಲ್ಲ
ಏಕೆ ಬೇಕು ಬಾಳಲಿ
ಚಿಂತೆ-ಗಿಂತೆಯೆಲ್ಲ
ಮರೆತು ಬಾಳು ಹಸನಾಗಲಿ
ಕಂಡ ಕನಸುಗಳು
ನೂರು ಇವೆ ಜೊತೆಯಲಿ
ನಮ್ಮ ಮನಸುಗಳು
ದುಡಿದು ಕನಸೆಲ್ಲ ನನಸಾಗಲಿ
ವರುಷವಿಡಿ ಇರಲಿ
ಎಲ್ಲ ನಲಿದಾಡೋ ಸಂಭ್ರಮ
ನೋವುಗಳೆಲ್ಲ ಮರೆಯಲಿ
ಸುಖಿಸುತ ಆರೋಗ್ಯ ಕ್ಷೇಮ
ಹೊಸ ವರುಷವೊಂದು
ಕೋರುತಿದೆ ನಿಮಗೆ ಶುಭಾಶಯ
ವರುಷದ ಹರ್ಷವೊಂದು
ಕಾಯುತಿದೆ ನಿಮ್ಮನ್ನೇ ಮಹಾಶಯ
ಕಳೆದೋಯಿತೊಂದು ವರುಷ
ನಲಿದು ನೆಗೆನೆಗೆದು
ಬಂತೊಂದು ಹೊಸ ವರುಷ
ಅಂತೆ-ಕಂತೆಯೆಲ್ಲ
ಏಕೆ ಬೇಕು ಬಾಳಲಿ
ಚಿಂತೆ-ಗಿಂತೆಯೆಲ್ಲ
ಮರೆತು ಬಾಳು ಹಸನಾಗಲಿ
ಕಂಡ ಕನಸುಗಳು
ನೂರು ಇವೆ ಜೊತೆಯಲಿ
ನಮ್ಮ ಮನಸುಗಳು
ದುಡಿದು ಕನಸೆಲ್ಲ ನನಸಾಗಲಿ
ವರುಷವಿಡಿ ಇರಲಿ
ಎಲ್ಲ ನಲಿದಾಡೋ ಸಂಭ್ರಮ
ನೋವುಗಳೆಲ್ಲ ಮರೆಯಲಿ
ಸುಖಿಸುತ ಆರೋಗ್ಯ ಕ್ಷೇಮ
ಹೊಸ ವರುಷವೊಂದು
ಕೋರುತಿದೆ ನಿಮಗೆ ಶುಭಾಶಯ
ವರುಷದ ಹರ್ಷವೊಂದು
ಕಾಯುತಿದೆ ನಿಮ್ಮನ್ನೇ ಮಹಾಶಯ
ಮೌನವೇ ಮಾತಾಗಿ
ನಡೆದು ಬಾ ಬಳಿಗೆ
ಸುಮ್ಮನೆ ಹಾಗೆ
ಮಾತೊಂದು ಆಡಬೇಡ
ನಗುವೊಂದಿರಲಿ ಜೊತೆಗೆ
ಕಣ್ಣುಗಳೇ ಮಾತಾಡುವಾಗ
ಬೇರೆ ಮಾತೇಕೆ ಈಗ
ಮೌನದಿ ಹೃದಯದ ಭಾಷೆ
ಕೇಳಲು ಎಂಥ ಸೊಗಸೆ
ಪ್ರೀತಿಯ ಮೂಟೆ ಹೊತ್ತು
ಅದರಲಿ ಸಾವಿರ ಕನಸನಿತ್ತು
ಜೊತೆ ಬಾರೆ ಮೆಲ್ಲಗೆ
ಮೌನದ ಆಭರಣ ಇರಲಿ ತೆಳ್ಳಗೆ
ಮೌನದಿ ಬೇಡ ಮಾತಿನ ಮೋಹ
ಆರದು ಎಂದು ಪ್ರೀತಿಯ ದಾಹ
ನೀನಿರದ ಸನಿಹ
ಭರಿಸಲಾಗದು ವಿರಹ
ಸುಮ್ಮನೆ ಹಾಗೆ
ಮಾತೊಂದು ಆಡಬೇಡ
ನಗುವೊಂದಿರಲಿ ಜೊತೆಗೆ
ಕಣ್ಣುಗಳೇ ಮಾತಾಡುವಾಗ
ಬೇರೆ ಮಾತೇಕೆ ಈಗ
ಮೌನದಿ ಹೃದಯದ ಭಾಷೆ
ಕೇಳಲು ಎಂಥ ಸೊಗಸೆ
ಪ್ರೀತಿಯ ಮೂಟೆ ಹೊತ್ತು
ಅದರಲಿ ಸಾವಿರ ಕನಸನಿತ್ತು
ಜೊತೆ ಬಾರೆ ಮೆಲ್ಲಗೆ
ಮೌನದ ಆಭರಣ ಇರಲಿ ತೆಳ್ಳಗೆ
ಮೌನದಿ ಬೇಡ ಮಾತಿನ ಮೋಹ
ಆರದು ಎಂದು ಪ್ರೀತಿಯ ದಾಹ
ನೀನಿರದ ಸನಿಹ
ಭರಿಸಲಾಗದು ವಿರಹ
ನೆರೆ ಹೊರೆ
ನೆಲ ಬಿರಿದಿತ್ತು
ಕಾಣಲೊಂದು ಹುಲ್ಲು ಇರಲಿಲ್ಲ
ಮೈಯನ್ನೆ ಸುಡುವ ಬಿಸಿಲು
ಸ್ವಚ್ಛ ನೀಲಿ ಆಕಾಶದ ಹೊರತು
ಜೀವ ತಣಿಸೋ
ಮಳೆಯ ಮೋಡಗಳಿರಲಿಲ್ಲ
ರೈತ ಆಕಾಶಕೆ ಕೈ ಮುಗಿದಾಯಿತು
ತಲೆ ಮೇಲೆ ಕೈ ಹೊತ್ತು ಕೂರಬೇಕಾಯಿತು
ಊರದೇವರ ಜಾತ್ರೆಯಾಯಿತು
ಕಪ್ಪೆಗಳ ಮದುವೆಯಾಯಿತು
ಇಲ್ಲ ಇಲ್ಲ
ಒಂದೇ ಒಂದು ಹನಿ ಮಳೆಯಾಗಲಿಲ್ಲ
ಎಲ್ಲೆಡೆ ನಿಟ್ಟುಸಿರು
ಸಾಲದ ಕರಿನೆರಳು
ಸಾವಿಗೆ ಶರಣಾಯಿತು ಜೀವ
ಬಿರಿದ ಹೊಲದಲ್ಲಿ ವಿಷ ಕುಡಿದ ದೇಹ
ಒಣಗಿದ ಮರದಲ್ಲೂ ನೇತಾಡಿತು ಜೀವ
ಕಣ್ಣೀರೊಂದೇ ಕಾಣಬೇಕಾಯಿತು
ಅದೊಂದು ಮಳೆ
ಎಲ್ಲಿ ಅಡಗಿತ್ತೋ
ಭುವಿ-ಬಾನು ಒಂದಾಗುವಂತೆ ಗುಡುಗಿತು
ಅಬ್ಬಾ! ಅದೇನು ಮಳೆಯೋ?
ನೆಲ-ಜನ-ಪ್ರಾಣಗಳೆಲ್ಲ ಅಯೋಮಯ
ನೀರು-ನೀರೆಂದು ಹಾತೊರೆದವರ
ಮನೆಯೇನು, ಪ್ರಾಣವು ನಡುಗಿತು
ನೊಂದ ಮನದ ಆಕ್ರಂದನಕೆ
ಹಲವು ಹೃದಯಗಳು ಮಣಿದವು
ತುಂಬಿದ ಹೊಳೆಯಂತೆ ಹರಿದಿತು
ನೆರವಿನ ಮಹಾಪೂರ
ನವಗ್ರಾಮಗಳ ನಿರ್ಮಾಣಕೆ
ಬುನಾದಿ ಹಾಕಿದರು ಹಲವರು
ಇಚ್ಚಾಶಕ್ತಿ ಮೆರೆಯಲಿ ಮೇಲಾಗಿ
ದುಡಿಯಲಿ ಎಲ್ಲ ಸಕ್ರಿಯವಾಗಿ
ನೊಂದವರ ಕಣ್ಣೀರು ಒರೆಸಲಿ
ರಾಜ್ಯವಾಳುವ ಕೈಗಳು
ನಲುಗಿದವರು ಮತ್ತೊಮ್ಮೆ ನಸುನಗಲಿ
ಹಸಿದವರ ಬದುಕು ಹಸನಾಗಲಿ
ಕಾಣಲೊಂದು ಹುಲ್ಲು ಇರಲಿಲ್ಲ
ಮೈಯನ್ನೆ ಸುಡುವ ಬಿಸಿಲು
ಸ್ವಚ್ಛ ನೀಲಿ ಆಕಾಶದ ಹೊರತು
ಜೀವ ತಣಿಸೋ
ಮಳೆಯ ಮೋಡಗಳಿರಲಿಲ್ಲ
ರೈತ ಆಕಾಶಕೆ ಕೈ ಮುಗಿದಾಯಿತು
ತಲೆ ಮೇಲೆ ಕೈ ಹೊತ್ತು ಕೂರಬೇಕಾಯಿತು
ಊರದೇವರ ಜಾತ್ರೆಯಾಯಿತು
ಕಪ್ಪೆಗಳ ಮದುವೆಯಾಯಿತು
ಇಲ್ಲ ಇಲ್ಲ
ಒಂದೇ ಒಂದು ಹನಿ ಮಳೆಯಾಗಲಿಲ್ಲ
ಎಲ್ಲೆಡೆ ನಿಟ್ಟುಸಿರು
ಸಾಲದ ಕರಿನೆರಳು
ಸಾವಿಗೆ ಶರಣಾಯಿತು ಜೀವ
ಬಿರಿದ ಹೊಲದಲ್ಲಿ ವಿಷ ಕುಡಿದ ದೇಹ
ಒಣಗಿದ ಮರದಲ್ಲೂ ನೇತಾಡಿತು ಜೀವ
ಕಣ್ಣೀರೊಂದೇ ಕಾಣಬೇಕಾಯಿತು
ಅದೊಂದು ಮಳೆ
ಎಲ್ಲಿ ಅಡಗಿತ್ತೋ
ಭುವಿ-ಬಾನು ಒಂದಾಗುವಂತೆ ಗುಡುಗಿತು
ಅಬ್ಬಾ! ಅದೇನು ಮಳೆಯೋ?
ನೆಲ-ಜನ-ಪ್ರಾಣಗಳೆಲ್ಲ ಅಯೋಮಯ
ನೀರು-ನೀರೆಂದು ಹಾತೊರೆದವರ
ಮನೆಯೇನು, ಪ್ರಾಣವು ನಡುಗಿತು
ನೊಂದ ಮನದ ಆಕ್ರಂದನಕೆ
ಹಲವು ಹೃದಯಗಳು ಮಣಿದವು
ತುಂಬಿದ ಹೊಳೆಯಂತೆ ಹರಿದಿತು
ನೆರವಿನ ಮಹಾಪೂರ
ನವಗ್ರಾಮಗಳ ನಿರ್ಮಾಣಕೆ
ಬುನಾದಿ ಹಾಕಿದರು ಹಲವರು
ಇಚ್ಚಾಶಕ್ತಿ ಮೆರೆಯಲಿ ಮೇಲಾಗಿ
ದುಡಿಯಲಿ ಎಲ್ಲ ಸಕ್ರಿಯವಾಗಿ
ನೊಂದವರ ಕಣ್ಣೀರು ಒರೆಸಲಿ
ರಾಜ್ಯವಾಳುವ ಕೈಗಳು
ನಲುಗಿದವರು ಮತ್ತೊಮ್ಮೆ ನಸುನಗಲಿ
ಹಸಿದವರ ಬದುಕು ಹಸನಾಗಲಿ
Labels:
ಕವನಗಳು
ಕಣ್ಣಾ ಮುಚ್ಚಾಲೆ
ಕಾಡುತ್ತೀಯಲ್ಲೆ
ನಲ್ಲೆ
ನನ್ನ ಕುಂತಲ್ಲೇ
ಆಡಿಸುತ್ತೀಯಲ್ಲೆ
ಕಾಡುತ್ತೀಯಲ್ಲೆ
ಕನಸಲ್ಲೂ ಕಾಡುತ್ತೀಯಲ್ಲೆ
ಓಡಾಡ್ತಿಯಲ್ಲೇ
ಮನಸೊಳಗೆಲ್ಲ ನಿಲ್ಲದೆ
ಕುಣಿದಾಡ್ತೀಯಲ್ಲೆ
ಕ್ಷಣ ಬಿಟ್ಟರೂ ನೀ ಲೋಕ ಸಂಚಾರಿ
ನೀ ಒಪ್ಪಿದರೆ ನಾ ಸಂಸಾರಿ
ಚಂಚಲೆ
ನಿಲ್ಲು ಅಲ್ಲೇ
ನಿಂತರು ನೀ ನನ್ನ ಕಾಡುತ್ತೀಯಲ್ಲೆ
ನೀನು ಪದವಾಗಿ
ಹಾಡಿಗೆ ಶೃತಿಯಾಗಿ
ಹಿಡಿಬೇಕು ಅಂದ್ಕೊಂಡ್ರು
ಸಿಗದೇ ನೀ ಓಡ್ತಿಯಲ್ಲೆ
ಪದಗಳಿಗೂ ಸಿಗದೇ ಕಾಡಿಸಿ ಓಡ್ತಿಯಲ್ಲೆ
ಪ್ರೀತಿಯ ಎಳೆ ಎಳೆದು
ಪ್ರೇಮದ ಬಲೆ ಹೆಣೆದು
ಹೇಗೋ ಇದ್ದವನ ಹಿಡಿದೆಳೆದು
ಕೆಡವಿ ಬೀಳಿಸಿದೆಯಲ್ಲೇ
ನನ್ನ ಸೆರೆ ಹಿಡಿದೆಯಲ್ಲೆ
ನಿಲ್ಲೇ ನನ್ನ ನಲ್ಲೆ
ನನ್ನ ಪ್ರೀತಿಯ ಬೇಡವೆಂದೆಯಲ್ಲೆ
ಆದರೂ ನಿನ್ನ ನೆನೆಯುತ
ನಾ ಕುಂತೆನಲ್ಲೆ
ನಿನ್ನೊರತು ನನಗ್ಯಾರು
ಬೇಡವಲ್ಲೆ ನಲ್ಲೆ
ನಲ್ಲೆ
ನನ್ನ ಕುಂತಲ್ಲೇ
ಆಡಿಸುತ್ತೀಯಲ್ಲೆ
ಕಾಡುತ್ತೀಯಲ್ಲೆ
ಕನಸಲ್ಲೂ ಕಾಡುತ್ತೀಯಲ್ಲೆ
ಓಡಾಡ್ತಿಯಲ್ಲೇ
ಮನಸೊಳಗೆಲ್ಲ ನಿಲ್ಲದೆ
ಕುಣಿದಾಡ್ತೀಯಲ್ಲೆ
ಕ್ಷಣ ಬಿಟ್ಟರೂ ನೀ ಲೋಕ ಸಂಚಾರಿ
ನೀ ಒಪ್ಪಿದರೆ ನಾ ಸಂಸಾರಿ
ಚಂಚಲೆ
ನಿಲ್ಲು ಅಲ್ಲೇ
ನಿಂತರು ನೀ ನನ್ನ ಕಾಡುತ್ತೀಯಲ್ಲೆ
ನೀನು ಪದವಾಗಿ
ಹಾಡಿಗೆ ಶೃತಿಯಾಗಿ
ಹಿಡಿಬೇಕು ಅಂದ್ಕೊಂಡ್ರು
ಸಿಗದೇ ನೀ ಓಡ್ತಿಯಲ್ಲೆ
ಪದಗಳಿಗೂ ಸಿಗದೇ ಕಾಡಿಸಿ ಓಡ್ತಿಯಲ್ಲೆ
ಪ್ರೀತಿಯ ಎಳೆ ಎಳೆದು
ಪ್ರೇಮದ ಬಲೆ ಹೆಣೆದು
ಹೇಗೋ ಇದ್ದವನ ಹಿಡಿದೆಳೆದು
ಕೆಡವಿ ಬೀಳಿಸಿದೆಯಲ್ಲೇ
ನನ್ನ ಸೆರೆ ಹಿಡಿದೆಯಲ್ಲೆ
ನಿಲ್ಲೇ ನನ್ನ ನಲ್ಲೆ
ನನ್ನ ಪ್ರೀತಿಯ ಬೇಡವೆಂದೆಯಲ್ಲೆ
ಆದರೂ ನಿನ್ನ ನೆನೆಯುತ
ನಾ ಕುಂತೆನಲ್ಲೆ
ನಿನ್ನೊರತು ನನಗ್ಯಾರು
ಬೇಡವಲ್ಲೆ ನಲ್ಲೆ
ನಡುಗುತಿದೆ ಇವನ ನಡೆಗೆ
ಹೆದರಿಕೆ ಶುರುವಾಗಿದೆ
ಯಾಕೋ ಅಮಾವಾಸ್ಯೆಗೆ
ತನ್ನೊಡಲ ಕಗ್ಗತ್ತಲಿನಲೂ
ಸಾಗುವ ಖದೀಮರ ನಿರ್ಭೀತ ನಡೆಗೆ
ಹಣವು ಅಳುತಲಿದೆ
ಹೆಣವು ಅಂಜಿದೆ
ಹಣಕಾಗಿ ಹೆಣವನ್ನು ಕದ್ದೊಯ್ಯುವ
ಲೋಭಿಗಳ ಹಾಳು ನಡೆಗೆ
ಭೂಮಿಯು ನಡುಗುತಿದೆ
ಕಾಡೆಲ್ಲೋ ಮರೆಯಾಗುತಿದೆ
ಕಾಸಿಗಾಗಿ ಮಣ್ಣನು ಬಿಡದ
ಮಾನವನ ಅತಿಆಸೆಯ ನಡೆಗೆ
ನೀರೆಲ್ಲ ನಾಪತ್ತೆ
ಉಸಿರೆಲ್ಲ ವಿಷವಂತೆ
ನೀರಲ್ಲೂ, ಉಸಿರಲ್ಲೂ ವಿಷವ ಹರಡೋ
ದಾನವ ರೂಪಿಯ ನಡೆಗೆ
ನಡುಗುತಿದೆ ಇವನ ನಡೆಗೆ
ಭುವಿ-ಬಾನೆಲ್ಲ
ಮೂಕವಾಗಿಯ ನೋಡುತಿದೆ
ಕಾಯುತ ಕಾಲ
ಯಾಕೋ ಅಮಾವಾಸ್ಯೆಗೆ
ತನ್ನೊಡಲ ಕಗ್ಗತ್ತಲಿನಲೂ
ಸಾಗುವ ಖದೀಮರ ನಿರ್ಭೀತ ನಡೆಗೆ
ಹಣವು ಅಳುತಲಿದೆ
ಹೆಣವು ಅಂಜಿದೆ
ಹಣಕಾಗಿ ಹೆಣವನ್ನು ಕದ್ದೊಯ್ಯುವ
ಲೋಭಿಗಳ ಹಾಳು ನಡೆಗೆ
ಭೂಮಿಯು ನಡುಗುತಿದೆ
ಕಾಡೆಲ್ಲೋ ಮರೆಯಾಗುತಿದೆ
ಕಾಸಿಗಾಗಿ ಮಣ್ಣನು ಬಿಡದ
ಮಾನವನ ಅತಿಆಸೆಯ ನಡೆಗೆ
ನೀರೆಲ್ಲ ನಾಪತ್ತೆ
ಉಸಿರೆಲ್ಲ ವಿಷವಂತೆ
ನೀರಲ್ಲೂ, ಉಸಿರಲ್ಲೂ ವಿಷವ ಹರಡೋ
ದಾನವ ರೂಪಿಯ ನಡೆಗೆ
ನಡುಗುತಿದೆ ಇವನ ನಡೆಗೆ
ಭುವಿ-ಬಾನೆಲ್ಲ
ಮೂಕವಾಗಿಯ ನೋಡುತಿದೆ
ಕಾಯುತ ಕಾಲ
Labels:
ಕವನಗಳು
Subscribe to:
Posts (Atom)