ಹೇ ಹುಡುಗಿ ಹೇಗಿದ್ದೀಯಾ?
ಎಷ್ಟೊಂದು ದಿನ ಆಯ್ತು ನಿನ್ನನ್ನ ನೋಡಿ? ಎಲ್ಲಿದ್ದೀಯ? ಏನು ಮಾಡ್ತಿದ್ದೀಯಾ? ನಿನಗೆ ಹೀಗೆಲ್ಲ ನಾನು ಪ್ರಶ್ನೆ ಕೇಳಿ, ನಿನ್ನ ಉತ್ತರ ಕೇಳಿ, ನನಗೆ ತುಂಬಾ ಸಮಾಧಾನ ಆಯ್ತು. ನನ್ನ ಮನಸ್ಸಲ್ಲಿ ಆದ ಸಮಾಧಾನ ಸಂತೋಷ ನಿನ್ನೆದುರಿಗೆ ವ್ಯಕ್ತಪಡಿಸೋದು ಎಷ್ಟು ಕಷ್ಟ ಅಂತ ನಿನಗೂ ಗೊತ್ತಾಗಬಹುದು ಅಂದ್ಕೋತೀನಿ.
ನಮ್ಮ ಹಿಂದಿನ ಸವಿ ಪ್ರೀತೀನ ಯಾವತ್ತೂ ನೆನಪು ಮಾಡ್ಕೋಬೇಡ. ಅವತ್ತು ಸವಿಯಾಗಿದ್ದ ಪ್ರೀತಿ ಇಂದಿಗೂ ನನಗೆ ಸವಿಯೇ. ಆದರೆ ಅದೆ ಸಮಾಜಕ್ಕೆ ಹುಳಿಯ ವಾಸನೆ ಬರುತ್ತೆ. ಅದು ಅವರ ಮೂಗಿನ ನೇರದ ನ್ಯಾಯಕ್ಕೆ ಅರ್ಥ ಆಗಲ್ಲ.
ಹೋಗಲಿ ಬಿಡು. ನೀನು ನನಗಿಂತ ಚೆನ್ನಾಗಿ ಬದುಕು ಕಟ್ಟಿಕೊಂಡದ್ದು, ನಿಜವಾಗಿಯೂ ಒಂದು ಸಾಹಸವೇ ಹೌದು. ಇನ್ನು ಏನು ಹೇಳೋಕು ಮನಸ್ಸು ತಡವರಿಸುತ್ತಿದೆ, ತೊದಲುತ್ತಿದೆ. ನೀನು ಚೆನ್ನಾಗಿದ್ದೀಯಾ ಅನ್ನೋ ಒಂದು ಸಿಹಿ ಸತ್ಯ ಸಾಕು. ನಾವೇನು ಪ್ರೀತಿಗಾಗಿ ತಾಜ್್ಮಹಲ್ ಕಟ್ಟಬೇಕಾಗಿರಲಿಲ್ಲ, ನಮ್ಮ ಬದುಕು ಕಟ್ಟಿಕೊಂಡರೆ ಸಾಕಿತ್ತು. ಈ ದಿನ ನಿನ್ನ ಬದುಕು ಹಸನಾಗಿದೆ. ನಾನೂ ಪರವಾಗಿಲ್ಲ. ಜೀವನವೆಂಬುದು ರೇಸಲ್ಲ, ನಾವೂ ಸೋಲಲಿಲ್ಲ. ನಿನ್ನ ಬದುಕು ಹೀಗೆ ಸುಂದರವಾಗಿರಲೆಂದೆ ನನ್ನ ಹಾರೈಕೆ.
................
Showing posts with label ಹಾಗೆ ಸುಮ್ಮನೇ. Show all posts
Showing posts with label ಹಾಗೆ ಸುಮ್ಮನೇ. Show all posts
ನಮಗೆ ನೆಮ್ಮದಿ ಮುಖ್ಯನೋ ಅಥವಾ ಮದುವೆ ಮುಖ್ಯನೋ?
Labels:
ಹಾಗೆ ಸುಮ್ಮನೇ
ನಾವು ನಮ್ಮವನ್ನ ಮರೆತಿದ್ದೇವೆ
ನಾವು ನಮ್ಮವನ್ನ ಮರೆತಿದ್ದೇವೆ. ಅದಕ್ಕೆ ಬೇರೆಯವರು ಬಂದು ನೆನಪು ಮಾಡಿಕೊಡ್ತಿದ್ದಾರೆ. ಹೌದು ತಾನೇ? ನಮ್ಮ ದೇಶಕ್ಕೆ ಬೇರೆಯವರಿಂದ (ಭಯೋತ್ಪಾದಕರು, ಬೇರೆ ರಾಷ್ಟ್ರಗಳಿಂದ) ಎಷ್ಟು ಅಪಾಯವಿದೆ ಎಮ್ಬುದನ್ನ ಇತ್ತೀಚಿಗೆ ಬಾಂಬ್ ದಾಳಿ ನಡೆದ ಮೇಲೆ ನಾವೆಲ್ಲ ನೆನಪು ಮಾಡಿಕೊಳ್ಳುತ್ತಿದ್ದೇವೆ. ಆದರೆ ಇಂತಹ ಘಟನೆಗಳು ಹತ್ತಾರು ಸಲ ಭಾರತದಲ್ಲಿ ವಿವಿಧ ಭಾಗಗಳಲ್ಲಿ ನಡೆದಿದೆ. ಅಂದು ನಡೆದಾಗ ಎಲ್ಲರೂ ಎಚ್ಚೆತ್ಟುಕೊಳ್ಳುತ್ತಾರೆ. ನಾವು-ನೀವು ಯಾರು ಬೇಕಾದರೂ ಆಗಿರಬಹುದು. ಮತ್ತೆ ಅದು ನೆನೆಪುಗಳ ಪುಟ ಸೇರಿಬಿಡುತ್ತದೆ. ನಮಗೆಲ್ಲ ನಿದ್ರೆ ಬಂದುಬಿಡುತ್ತದೆ.
ಈ ಎಲ್ಲ ಪರಿಸ್ಥಿತಿಗಳು ರಾಜಕಾರಣಿಗಳ ಚುನಾವಣೆಗೆ ಸರಿಯಾದ ಆಹಾರವಾಗಿಬಿಡುತ್ತೆ, ಮಾಧ್ಯಮಗಳ ಪ್ರಚಾರಕ್ಕೆ, ಬರಹಗಾರರ ಬರವಣಿಗೆಗೆ ಸೀಮಿತವಾಗಿಬಿಡುತ್ತದೆ ಅಥವಾ ಹೆಚ್ಚೆಂದರೆ ಜನರೆಲ್ಲ ಮೆಚ್ಚಿಕೊಳ್ಳೋ ಒಂದು ಸಿನಿಮಾ ಆಗಿಬಿಡುತ್ತೆ. ಇದರ ಹೊರತಾಗಿ ಮತ್ತೊಂದು ಇಂತಹ ಘಟನೆ ನಡೆಯದಂತೆ ತಡೆಯುವ ಯಾವು ಪ್ರಯತ್ನವೂ ನಡೆದಂತೆ ನಮಗೆ ಕಾಣಿಸುತ್ತಿಲ್ಲ.
ಈಗಲಾದರೂ ನಾವು ಸ್ವಲ್ಪ ಜಾಗೃತರಾದಂತೆ ಅನ್ನಿಸುತಿದೆ. ಆ ಜಾಗೃತಿ ಸದಾ ಇರಬೇಕು. ಚುನಾವಣೆಯ ಸಮಯದಲ್ಲಿ ಅರ್ಹತೆಯನ್ನು ನಿರ್ಧರಿಸದೇ ಯಾವುದೋ ಒಂದು ತರ್ಕಕ್ಕೆ ಬಿದ್ದೋ, ಹಣದ ಆಮಿಶಕ್ಕೋ ಬಲಿಯಾಗಿ ನಮ್ಮ ಅಮೂಲ್ಯವಾದ ಮತವನ್ನ ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ, ಕೆಲಸ ಮಾಡದೇ ಬರೀ ಕಟೌಟ್ ಮಾಡಿಸಿಕೊಂಡವರಿಗೆ ಹಾಕುತ್ತೇವೆ. ಯುವಜನತೆ ದೇಶದ ಆಡಳಿತವನ್ನು ಕೈಗೆ ತೆಗೆದುಕೊಳ್ಳಬೇಕಾಗಿದೆ. ಇದು ಸಾಧ್ಯವಾಗುವುದಾದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗಾದರೂ ಸುಧಾರಿಸುವುದು. ಇಲ್ಲದಿದ್ದರೆ ಅದೇ ರಾಗ ಅದೇ ಹಾಡು.
ಚುನಾವಣೆಗಳನ್ನು ಯಾವುದೋ ಕಾರಣಕ್ಕೂ ತಿರಸ್ಕರಿಸುವುದು ನಮ್ಮಿನ್ದಾಗುವ ಅಪರಾಧವೆ. ಸರಿಯಾದ ನೇತಾರರನ್ನು ಆರಿಸುವುದು, ನಮ್ಮ ವ್ಯಾಪ್ತಿಯಲ್ಲಿ ಎಲ್ಲ ಸರ್ಕಾರಿ ಯೋಜನೆಗಳು ಯೋಜನಾಬದ್ದವಾಗಿ ಜಾರಿಗೊಳ್ಳುವಂತೆ ನೋಡಿಕೊಂಡರೆ ಎಲ್ಲವೂ ಒಳ್ಳೆಯದಾಗುತ್ತದೆ. ಈ ಸಂಧರ್ಭದಲ್ಲಿ ನೊಂದ ಜೀವಗಳಿಗೆ ಸ್ವಲ್ಪವಾದರೂ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವೆ.
ಈ ಎಲ್ಲ ಪರಿಸ್ಥಿತಿಗಳು ರಾಜಕಾರಣಿಗಳ ಚುನಾವಣೆಗೆ ಸರಿಯಾದ ಆಹಾರವಾಗಿಬಿಡುತ್ತೆ, ಮಾಧ್ಯಮಗಳ ಪ್ರಚಾರಕ್ಕೆ, ಬರಹಗಾರರ ಬರವಣಿಗೆಗೆ ಸೀಮಿತವಾಗಿಬಿಡುತ್ತದೆ ಅಥವಾ ಹೆಚ್ಚೆಂದರೆ ಜನರೆಲ್ಲ ಮೆಚ್ಚಿಕೊಳ್ಳೋ ಒಂದು ಸಿನಿಮಾ ಆಗಿಬಿಡುತ್ತೆ. ಇದರ ಹೊರತಾಗಿ ಮತ್ತೊಂದು ಇಂತಹ ಘಟನೆ ನಡೆಯದಂತೆ ತಡೆಯುವ ಯಾವು ಪ್ರಯತ್ನವೂ ನಡೆದಂತೆ ನಮಗೆ ಕಾಣಿಸುತ್ತಿಲ್ಲ.
ಈಗಲಾದರೂ ನಾವು ಸ್ವಲ್ಪ ಜಾಗೃತರಾದಂತೆ ಅನ್ನಿಸುತಿದೆ. ಆ ಜಾಗೃತಿ ಸದಾ ಇರಬೇಕು. ಚುನಾವಣೆಯ ಸಮಯದಲ್ಲಿ ಅರ್ಹತೆಯನ್ನು ನಿರ್ಧರಿಸದೇ ಯಾವುದೋ ಒಂದು ತರ್ಕಕ್ಕೆ ಬಿದ್ದೋ, ಹಣದ ಆಮಿಶಕ್ಕೋ ಬಲಿಯಾಗಿ ನಮ್ಮ ಅಮೂಲ್ಯವಾದ ಮತವನ್ನ ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ, ಕೆಲಸ ಮಾಡದೇ ಬರೀ ಕಟೌಟ್ ಮಾಡಿಸಿಕೊಂಡವರಿಗೆ ಹಾಕುತ್ತೇವೆ. ಯುವಜನತೆ ದೇಶದ ಆಡಳಿತವನ್ನು ಕೈಗೆ ತೆಗೆದುಕೊಳ್ಳಬೇಕಾಗಿದೆ. ಇದು ಸಾಧ್ಯವಾಗುವುದಾದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗಾದರೂ ಸುಧಾರಿಸುವುದು. ಇಲ್ಲದಿದ್ದರೆ ಅದೇ ರಾಗ ಅದೇ ಹಾಡು.
ಚುನಾವಣೆಗಳನ್ನು ಯಾವುದೋ ಕಾರಣಕ್ಕೂ ತಿರಸ್ಕರಿಸುವುದು ನಮ್ಮಿನ್ದಾಗುವ ಅಪರಾಧವೆ. ಸರಿಯಾದ ನೇತಾರರನ್ನು ಆರಿಸುವುದು, ನಮ್ಮ ವ್ಯಾಪ್ತಿಯಲ್ಲಿ ಎಲ್ಲ ಸರ್ಕಾರಿ ಯೋಜನೆಗಳು ಯೋಜನಾಬದ್ದವಾಗಿ ಜಾರಿಗೊಳ್ಳುವಂತೆ ನೋಡಿಕೊಂಡರೆ ಎಲ್ಲವೂ ಒಳ್ಳೆಯದಾಗುತ್ತದೆ. ಈ ಸಂಧರ್ಭದಲ್ಲಿ ನೊಂದ ಜೀವಗಳಿಗೆ ಸ್ವಲ್ಪವಾದರೂ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವೆ.
Labels:
ಹಾಗೆ ಸುಮ್ಮನೇ
ನನ್ನ ಪ್ರೀತಿ
ನನ್ನ ಪ್ರೀತಿಯ ಸಾಲುಗಳಿವು
ಕವನವಾಗಬೇಕೆಂದೇನು ಇಲ್ಲ
ಆಗದಿದ್ದರೆ ನನ್ನ ಪ್ರೀತಿಗೆ
ಪೀಠಿಕೆಯಾದರೂ ಆಗಲಿ
ನನ್ನ ಪ್ರೀತಿ ನಿನಗೆ
ಇಷ್ಟವಾಗಬೇಕೆಂದೇನು ಇಲ್ಲ
ಆಗದಿದ್ದರೂ ನಾ ನಿನ್ನ
ಪ್ರೀತಿಸುವುದ ಬಿಡುವುದಿಲ್ಲ
ನಿನ್ನೀ ಮೊಗದಿ
ನಗು ಕಳೆ ತುಮ್ಬಿರೆ ಸಾಕು
ಸಾರ್ಥಕ ನನ್ನ
ಬದುಕು, ಪ್ರೀತಿ
ಕವನವಾಗಬೇಕೆಂದೇನು ಇಲ್ಲ
ಆಗದಿದ್ದರೆ ನನ್ನ ಪ್ರೀತಿಗೆ
ಪೀಠಿಕೆಯಾದರೂ ಆಗಲಿ
ನನ್ನ ಪ್ರೀತಿ ನಿನಗೆ
ಇಷ್ಟವಾಗಬೇಕೆಂದೇನು ಇಲ್ಲ
ಆಗದಿದ್ದರೂ ನಾ ನಿನ್ನ
ಪ್ರೀತಿಸುವುದ ಬಿಡುವುದಿಲ್ಲ
ನಿನ್ನೀ ಮೊಗದಿ
ನಗು ಕಳೆ ತುಮ್ಬಿರೆ ಸಾಕು
ಸಾರ್ಥಕ ನನ್ನ
ಬದುಕು, ಪ್ರೀತಿ
Labels:
ಕವನಗಳು,
ಹಾಗೆ ಸುಮ್ಮನೇ
ನನ್ನ ಮೊದಲನೆ ಲವ್ ಲೆಟರ್

ಹೈ ಡಿಯರ್ ಲಿಲ್ಲಿ,
ಹೌ ರ್ ಯು? ಈ ಲೆಟರ್ನ ಪೂರ್ತಿಯಾಗಿ ಓದು. ಇದು ನನ್ನ ಮೊದಲನೆ ಲವ್ ಲೆಟರ್. ಹಾಗಾಗಿ ಈ ಲೆಟರ್ ಅನ್ನು ಮೊದಲಿನಿಂದ ಕೊನೆಯವರೆಗೆ ಸಂಪೂರ್ಣವಾಗಿ ಓದು, ನಂತರ ನೀನು ಪ್ರೀತಿಸದೇ ಹೋದರೂ ಪರವಾಗಿಲ್ಲ.
ನಾನು ರಾಜ್, ಎಮ್.ಎನ್.ಸಿ. ಕಂಪನಿ ಒಂದರಲ್ಲಿ ಕೆಲ್ಸ ಮಾಡ್ತಿದ್ದೀನಿ. ನಾನು ಕೆಲ್ಸ ಮಾಡೋ ಕಡೆ ಹತ್ತಾರು, ನೂರಾರು ಹುಡ್ಗೀರನ್ನ ನೋಡಿದ್ದೀನಿ. ನನ್ನ ಮನೆಯ ಎದುರುಗಡೆ ಲೇಡೀಸ್ ಪಿ.ಜಿ. ಇದೆ. ಅಲ್ಲೂ ಹತ್ತಾರು ಹುಡ್ಗೀರು ಇದ್ದಾರೆ. ನೋಡಲಿಕ್ಕೆ ಚೆನ್ನಾಗಿರೋರು ಇದ್ದಾರೆ. ಆದರೆ ಯಾಕೋ ನಿನ್ನ ನೋಡಿದ ಮೇಲೆ ಮತ್ಯಾರನ್ನು ನೋಡಬಾರದು ಅನ್ನಿಸಿತು. ಯಾಕೋ ಮನಸ್ಸು ಅಲ್ಲೇ ಸ್ಟ್ರಕ್ ಆಗಿ ಬಿಟ್ಟಿದೆ. ನನಗೆ ಇದೆ ಪ್ರೀತಿ ಅನಿಸಿತು. ಬುದ್ಧಿ ತುಂಬಾ ಯೋಚನೆ ಮಾಡ್ತು, ಇದು ಯಾವುದೇ ಇನ್ಫಾಚುಯೇಶನ್ ಅಲ್ಲ ಅಂತ ಕೂಡ ಬುದ್ಧಿ ಮನಸ್ಸಿಗೆ ಹೇಳಿತು. ನಾನು ನಿನ್ನ ನೋಡಿದ್ದು ಇದೆ ಮೊದಲ ಸಲ ಏನಲ್ಲ. ಇದು ಕ್ರಮೇಣ ಜರುಗಿದ್ದು. ನೀನು ಎಲ್ಲರಿಗಿಂತ ಚೆನ್ನಾಗಿದ್ದೀಯ ಅಂತ ನಾನು ನಿನಗೆ ಸುಳ್ಳು ಹೇಳಬೇಕಾಗಿಲ್ಲ. ನಾನೊಬ್ಬ ಫ್ಲರ್ಟ್ ಕೂಡ ಖಂಡಿತ ಅಲ್ಲ. ನನಗೆ ಹುಡ್ಗೀರಲ್ಲಿ ಫ್ರೆಂಡ್ಸ್ ಇದ್ದಾರೆ. ಆದರೆ ಗರ್ಲ್ ಫ್ರೆಂಡ್ ಇಲ್ಲ. ನೀನು ಬರಿ ನನ್ನ ಗರ್ಲ್ ಫ್ರೆಂಡ್ ಆಗಬೇಕು ಅಂತ ಪೀಠಿಕೆ ಆಗ್ತಾ ಇದ್ದೀನಿ ಅಂತ ಖಂಡಿತ ತಿಳ್ಕೋಬೇಡ. ನೀನು ನನ್ನ ಬಾಳಿ ನುದ್ದಕ್ಕೂ ಇರಬೇಕು, ಅದು ನನ್ನ ಆಸೆ. ನನ್ನ ಮನಸ್ಸಿಗೆ ಅನ್ನಿಸ್ಸಿದ್ದನ್ನ ನಿನಗೆ ನೇರವಾಗಿ ಹೇಳ್ತಾ ಇದ್ದೀನಿ. ಡೋನ್ಟ್ ಥಿಂಕ್ ಸಿಲ್ಲಿ.
ನಿನಗೆ ಈ ಲೆಟರ್ ಓದಿ, ಸ್ವಲ್ಪ ನಗು ಬಂದರೆ, ಓ ಕೆ, ಐ ವಿಲ್ ಆಲ್ಸೊ ಎಂಜಾಯ್ ಇನ್ ಯುವರ್ ಸ್ಮೈಲ್. ತಲೆನೋವು ಬರೋದಾದರೆ ಐ ಡೋನ್ಟ್ ಬಾದರ್ ಟೂ ಮಚ್. ಯಾಕೆಂದರೆ ಮನಸ್ಸಿನಲ್ಲಿ ಇರೋ ಸವಿ ಪ್ರೀತಿ ನಾನು ತಿಳಿಸುವುದಾದರೂ ಹೇಗೆ?
ಈ ಲೆಟರ್ ನ ಟೈಮ್ ಪಾಸ್ಗೆ ಬರೆದಿದ್ದು ಅಂತ ತಿಳ್ಕೋಬೇಡ. ನಾನು ನಿನಗೆ ನೇರವಾಗಿ ಹೇಳೋಣ ಅಂದುಕೊಂಡೆ. ಆದರೆ ಮಾತಾಡಿದಷ್ಟು, ಫಿಲ್ಮ್ನಲ್ಲಿ ಹೇಳಿದಷ್ಟು ಸುಲಭ ಅಲ್ಲ. ಫ್ರೆಂಡ್ಸ್ ಹತ್ತಿರ ಹೇಳಿ ಕಳುಹಿಸೋಣ ಅಂದುಕೊಂಡೆ, ಆದರೆ ಅವರು ಮೀಡಿಯೇಟರ್ ಯಾಕೆ ಆಗಬೇಕು?
ನಿನಗೆ ಹೇಳಬೇಕು ಅನ್ನಿಸಿದ್ದನ್ನ ಸಂಕ್ಷಿಪ್ತವಾಗಿ ಹೇಳಿದ್ದೀನಿ. ನಿನಗೂ ನನ್ನ ಮೇಲೆ ಪ್ರೀತಿ ಬಂದರೆ ಪ್ರೀತಿಸು. ಯಾವ ರೀತಿಯ ಬಲವನ್ತವು ಇಲ್ಲ. ಯಾಕೆಂದರೆ ಪ್ರೀತಿ ಬಲವಂತದಿಂದ ಬರೋದಿಲ್ಲ ಅನ್ನೋದು ನನಗೆ ಗೊತ್ತು. ಆದರೆ ಸುಳ್ಳು ಹೇಳಿ ಕೈ ಕೊಡಬೇಡ. ನನ್ನ ಪರ್ಸನ್ಯಾಲಿಟೀ ನೋಡಿಯೋ, ಪ್ರಾಪರ್ಟೀ ನೋಡಿಯೋ ಪ್ರೀತಿಸಬೇಡ. ಯಾಕೆಂದರೆ ಅದು ಪ್ರೀತಿನೇ ಆಗಿರಲ್ಲ. ಹಾಗಾಗಿ ನಿನ್ನ ಬುದ್ಧಿ ಮಾತಿಗಿಂತ, ಮನಸ್ಸಿನ ಮಾತು ಕೇಳು. ನಿನ್ನ ಮನಸ್ಸಿಗೆ ನಾನು ಸಂಗಾತಿ ಆಗಬಲ್ಲೆನು ಅನ್ನಿಸಿದರೆ, ನಿನ್ನ ಪ್ರೀತಿನ ನನ್ನ ಜೊತೆ ಹಂಚಿಕೊಳ್ಳಬಹುದು. ನೀನು ನನ್ನ ಪ್ರೀತಿನ ಒಪ್ಪಿಕೊಳ್ಳಲೇಬೇಕು ಅಂತಾನೂ ಇಲ್ಲ. ಆದರೆ ನೀನು ನನ್ನ ಜೊತೆ ಮಾತನಾಡಲಿಲ್ಲ ಅಂದರೆ ಮಾತ್ರ, ನನಗೆ ನೆನೆಸಿಕೊಳ್ಳೋದಕ್ಕೆ ಆಗೋದಿಲ್ಲ. ಮತ್ತೆ ಯಾರನ್ನಾದರೂ ನೀನು ಈಗಾಗಲೆ ಪ್ರೀತಿಸುತ್ತಿದ್ದರೆ, ನನ್ನ ಕಡೆಯಿಂದ ಬೆಸ್ಟ್ ವಿಶಸ್ ಮತ್ತು ಸಾರೀ, ನಾನು ಸ್ವಲ್ಪ ಲೇಟ್ ಆದೇ ಅನ್ನಿಸುತ್ತೆ. ಸೋ ನೋ ಎಕ್ಸ್ಪೆಕ್ಟೇಶನ್, ಓನ್ಲೀ ಲವ್,
ಟೇಕ್ ಕೇರ್,
ರಾಜ್
Labels:
ಹಾಗೆ ಸುಮ್ಮನೇ
ಮನೆಯೇ ಮಂದಿರವಾಗಲಿ
ಮನೆಯೇ ಮಂದಿರವಾಗಲಿ
ಮನಸು ದೇವರಾಗಲಿ
ನಿಮ್ಮ ಪ್ರೀತಿ, ಹಾರೈಕೆಗಳೇ
ನನಗೆ ದಾರಿದೀಪವಾಗಲಿ
ಮನಸು ದೇವರಾಗಲಿ
ನಿಮ್ಮ ಪ್ರೀತಿ, ಹಾರೈಕೆಗಳೇ
ನನಗೆ ದಾರಿದೀಪವಾಗಲಿ
Labels:
ಕವನಗಳು,
ಹಾಗೆ ಸುಮ್ಮನೇ
Subscribe to:
Posts (Atom)