Showing posts with label ಕವನ. Show all posts
Showing posts with label ಕವನ. Show all posts

ನಿದ್ದೇನ ಕದ್ದವಳು


ಬರೆಯುವ ಮೊದಲೆ ಅಕ್ಷರವ ಕದಿಯೋಳು

ಬರೆದಾದ ಮೇಲೂ ನಿದ್ದೇನ ಕದ್ದವಳು

ನನ್ನೆದುರಿಗೆ ಬಂದಾಗ ಏನು ಮಾಡಲಿ

ಅವಳೇನಾದರೂ ಕೇಳಿದರೆ ಏನು ಹೇಳಲಿ?

 

ಕಣ್ಣ ನೋಟವ ಕದ್ದು ಎಲ್ಲೋ ಬಚ್ಚಿಟ್ಟು

ಎಲ್ಲಿ ಏನು ಹುಡುಕುವೆ ಎಂದು ಕೇಳೋವಳು

ಮಾತಿಗೆ ಎದುರಾಡದೆ ನಿಂತಾಗ

ನಕ್ಕು ಓಡಿದರೆ ನಾನೇನೂ ಮಾಡಲಿ?

 

ಕದ್ದ ಮಾಲು ಪಡೆಯುವುದಾದರು ಹೇಗೆ

ಕದ್ದ ಕನಸು, ಮನಸು ಬರುವುದೇ ಹಾಗೆ

ನೀವಾದರೂ ಸ್ವಲ್ಪ ಹೇಳಿ ಅವಳಿಗೆ

ಈಗಲಾದರೂ ತಂದು ಕೊಡಲಿ, ಇಲ್ಲವಾದರೆ ಅವಳ ಮನಸ್ಸು ಕೊಡಲಿ

ಯುಗಾದಿ

ಗೆಲ್ಲುವ ಚಲವಿತ್ತು
ಅಭಿಮಾನದ ಹರಿವಿತ್ತು
ಸಾಹಸ,ಸಾಧನೆ ತೋರಿದ ಧೋನಿಗೆ
ದೇವರೆ ನೀಡಿದ ಈ ಅಣಿಮುತ್ತು

ಜಯಹೋ ಇಂಡಿಯಾ
ಎದುರಾಳಿ ಯಾರಾದರೂ
ಹರಸುವಾಗ ಕೋಟಿ ಹೃದಯ
ನಿಮಗಿಲ್ಲ ಯಾರ ಭಯ

ಆ ಸ್ಥಳವೇ ಭಾರತದ ವಾಂಖೆಡೆ
ಜಗದ ಗಮನವೆಲ್ಲ ಅದರ ಕಡೆ
ಭಾಗ್ಯದ ಲಕ್ಷ್ಮಿ ನಮ್ಮಮ್ಮ
ಯುಗಾದಿಗೆ ಹರಸಿದಳು ಧೋನಿ ಪಡೆ

ಭಾಗ್ಯದ ಭಾರತದ ವಾಸಿಗಳೆಲ್ಲ
ಬಾಳಲಿ ಹರುಷದಿ ವರುಷವೆಲ್ಲ
ಧೋನಿ ಕಂಡ ಹರುಷದ ಯುಗಾದಿ
ಹರಡಲಿ ಹರುಷ ಜಗಕೆಲ್ಲ

ಕಣ್ಣಾ ಮುಚ್ಚಾಲೆ

ಕಾಡುತ್ತೀಯಲ್ಲೆ
ನಲ್ಲೆ
ನನ್ನ ಕುಂತಲ್ಲೇ
ಆಡಿಸುತ್ತೀಯಲ್ಲೆ

ಕಾಡುತ್ತೀಯಲ್ಲೆ
ಕನಸಲ್ಲೂ ಕಾಡುತ್ತೀಯಲ್ಲೆ
ಓಡಾಡ್ತಿಯಲ್ಲೇ
ಮನಸೊಳಗೆಲ್ಲ ನಿಲ್ಲದೆ
ಕುಣಿದಾಡ್ತೀಯಲ್ಲೆ

ಕ್ಷಣ ಬಿಟ್ಟರೂ ನೀ ಲೋಕ ಸಂಚಾರಿ
ನೀ ಒಪ್ಪಿದರೆ ನಾ ಸಂಸಾರಿ
ಚಂಚಲೆ
ನಿಲ್ಲು ಅಲ್ಲೇ
ನಿಂತರು ನೀ ನನ್ನ ಕಾಡುತ್ತೀಯಲ್ಲೆ

ನೀನು ಪದವಾಗಿ
ಹಾಡಿಗೆ ಶೃತಿಯಾಗಿ
ಹಿಡಿಬೇಕು ಅಂದ್ಕೊಂಡ್ರು
ಸಿಗದೇ ನೀ ಓಡ್ತಿಯಲ್ಲೆ
ಪದಗಳಿಗೂ ಸಿಗದೇ ಕಾಡಿಸಿ ಓಡ್ತಿಯಲ್ಲೆ

ಪ್ರೀತಿಯ ಎಳೆ ಎಳೆದು
ಪ್ರೇಮದ ಬಲೆ ಹೆಣೆದು
ಹೇಗೋ ಇದ್ದವನ ಹಿಡಿದೆಳೆದು
ಕೆಡವಿ ಬೀಳಿಸಿದೆಯಲ್ಲೇ
ನನ್ನ ಸೆರೆ ಹಿಡಿದೆಯಲ್ಲೆ

ನಿಲ್ಲೇ ನನ್ನ ನಲ್ಲೆ
ನನ್ನ ಪ್ರೀತಿಯ ಬೇಡವೆಂದೆಯಲ್ಲೆ
ಆದರೂ ನಿನ್ನ ನೆನೆಯುತ
ನಾ ಕುಂತೆನಲ್ಲೆ
ನಿನ್ನೊರತು ನನಗ್ಯಾರು
ಬೇಡವಲ್ಲೆ ನಲ್ಲೆ