ನಮ್ ಕಾಲದಾಗೆ ಹಿನ್ಗಿರಲಿಲ್ಲ ಮಗ

ನಮ್ ಕಾಲದಾಗೆ ಹಿನ್ಗಿರಲಿಲ್ಲ ಮಗ
ಬಾಸು-ಗೀಸು ಅನ್ನೋದನ್ನ ಕೇಳಿರಲಿಲ್ಲ ಜಗ

ಬೆಳಬೆಳಗ್ಗೆನೆ ಎದ್ದು ಗೇಮೆಗೆ ಹೊಲಕ್ಕೊಯ್ತಿದ್ವು
ತನ್ಗ್ಳಿಟ್ಟು-ಸೊಪ್ಪು ಸಿಕ್ರೆ ಅದೇ ಸ್ವರ್ಗ ಅಂತ ತಿನ್ತಿದ್ವು
ನೆಲ-ಜಲ ಅಂದ್ರೆ ಭೂಮ್ತಾಯಿ ಅಂತಿದ್ವು
ಊರವ್ರೆಲ್ಲ ನಮ್ಮವ್ರೆ ಅಂತ ಕರಿತಿದ್ವು

ಗಡಿಯಾರದಂಗೆ ಕಾಲನು ಬದಲಾಯಿತು ಮಗ
ನಮ್ಮಾದಾದ್ರೂ ಭೂಮಿ ಕೇಳೊನ್ಗಿಲ್ಲ ಈಗ

ಬೆಳಬೆಳಗ್ಗೆನೆ ಎದ್ದು ಗೇಮೆಗೆ ಆಫಿಸ್ಗೋಯ್ತಾರೆ
ಇಡ್ಲಿ-ದೋಸೆ ಬಿಟ್ಟು ಪಿಜ್ಜ-ಗಿಜ್ಜ ಅಂತ ಅದೇನೋ ತಿಂತಾರೆ
ಕಂಡವ್ರ ನೆಲ ಸಿಕ್ರೆ ಸಾಕು ಬಾಚಿಕೊಳ್ತಾರೆ
ಪಕ್ಕದ್‍ಮನೆಯವನು ಸತ್ರು ಯಾರೋ ಹೋಗೋ ಅಂತಾರೆ

ನಮ್ ಕಾಲದಾಗೆ ಹಿನ್ಗಿರಲಿಲ್ಲ ಮಗ
ಕೇಸು-ಫೀಸು ಅಂತೂ ಅಲಿತಿರಲಿಲ್ಲ ಆಗ

ಅದೇನೋ ಸಾಫ್ಟ್‌ವೇರು-ಹಾರ್ಡ್‌ವೇರು
ಅಂತ ಬಾಯೀ ಬಡ್ಕೊಂತಾರಲ್ಲೋ
ಐಟಿ-ಬಿಟಿ ಅಂತ ಬಂದು
ಹೊಲದಾಗೇ ಕೆಲ್ಸ ಬಿಟ್ಟೆ ಬಿಟ್ರಲ್ಲೋ

ಜಾತಿ-ಧರ್ಮ ಅಂತ ಹೊಡೆದಾಡ್ತ ಕುಂತವ್ರೋ
ಏನಕ್ಕೂ ಇರಲಿ ಅಂತ ಬಾಂಬು ತನ್ದವ್ರೊ
ಬೇಲಿನೆ ಎದ್ದು ಹೊಲ ಮೇಯೊ ಕಾಲ ಬಂದಿದೆ
ದೇಶ-ಭಾಷೆಗೆ ಅಪಾಯದ ಸುದ್ಧಿ ತಂದಿದೆ

No comments: