ನಾವು ನಮ್ಮವನ್ನ ಮರೆತಿದ್ದೇವೆ

ನಾವು ನಮ್ಮವನ್ನ ಮರೆತಿದ್ದೇವೆ. ಅದಕ್ಕೆ ಬೇರೆಯವರು ಬಂದು ನೆನಪು ಮಾಡಿಕೊಡ್ತಿದ್ದಾರೆ. ಹೌದು ತಾನೇ? ನಮ್ಮ ದೇಶಕ್ಕೆ ಬೇರೆಯವರಿಂದ (ಭಯೋತ್ಪಾದಕರು, ಬೇರೆ ರಾಷ್ಟ್ರಗಳಿಂದ) ಎಷ್ಟು ಅಪಾಯವಿದೆ ಎಮ್ಬುದನ್ನ ಇತ್ತೀಚಿಗೆ ಬಾಂಬ್ ದಾಳಿ ನಡೆದ ಮೇಲೆ ನಾವೆಲ್ಲ ನೆನಪು ಮಾಡಿಕೊಳ್ಳುತ್ತಿದ್ದೇವೆ. ಆದರೆ ಇಂತಹ ಘಟನೆಗಳು ಹತ್ತಾರು ಸಲ ಭಾರತದಲ್ಲಿ ವಿವಿಧ ಭಾಗಗಳಲ್ಲಿ ನಡೆದಿದೆ. ಅಂದು ನಡೆದಾಗ ಎಲ್ಲರೂ ಎಚ್ಚೆತ್ಟುಕೊಳ್ಳುತ್ತಾರೆ. ನಾವು-ನೀವು ಯಾರು ಬೇಕಾದರೂ ಆಗಿರಬಹುದು. ಮತ್ತೆ ಅದು ನೆನೆಪುಗಳ ಪುಟ ಸೇರಿಬಿಡುತ್ತದೆ. ನಮಗೆಲ್ಲ ನಿದ್ರೆ ಬಂದುಬಿಡುತ್ತದೆ.
ಈ ಎಲ್ಲ ಪರಿಸ್ಥಿತಿಗಳು ರಾಜಕಾರಣಿಗಳ ಚುನಾವಣೆಗೆ ಸರಿಯಾದ ಆಹಾರವಾಗಿಬಿಡುತ್ತೆ, ಮಾಧ್ಯಮಗಳ ಪ್ರಚಾರಕ್ಕೆ, ಬರಹಗಾರರ ಬರವಣಿಗೆಗೆ ಸೀಮಿತವಾಗಿಬಿಡುತ್ತದೆ ಅಥವಾ ಹೆಚ್ಚೆಂದರೆ ಜನರೆಲ್ಲ ಮೆಚ್ಚಿಕೊಳ್ಳೋ ಒಂದು ಸಿನಿಮಾ ಆಗಿಬಿಡುತ್ತೆ. ಇದರ ಹೊರತಾಗಿ ಮತ್ತೊಂದು ಇಂತಹ ಘಟನೆ ನಡೆಯದಂತೆ ತಡೆಯುವ ಯಾವು ಪ್ರಯತ್ನವೂ ನಡೆದಂತೆ ನಮಗೆ ಕಾಣಿಸುತ್ತಿಲ್ಲ.

ಈಗಲಾದರೂ ನಾವು ಸ್ವಲ್ಪ ಜಾಗೃತರಾದಂತೆ ಅನ್ನಿಸುತಿದೆ. ಆ ಜಾಗೃತಿ ಸದಾ ಇರಬೇಕು. ಚುನಾವಣೆಯ ಸಮಯದಲ್ಲಿ ಅರ್ಹತೆಯನ್ನು ನಿರ್ಧರಿಸದೇ ಯಾವುದೋ ಒಂದು ತರ್ಕಕ್ಕೆ ಬಿದ್ದೋ, ಹಣದ ಆಮಿಶಕ್ಕೋ ಬಲಿಯಾಗಿ ನಮ್ಮ ಅಮೂಲ್ಯವಾದ ಮತವನ್ನ ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ, ಕೆಲಸ ಮಾಡದೇ ಬರೀ ಕಟೌಟ್ ಮಾಡಿಸಿಕೊಂಡವರಿಗೆ ಹಾಕುತ್ತೇವೆ. ಯುವಜನತೆ ದೇಶದ ಆಡಳಿತವನ್ನು ಕೈಗೆ ತೆಗೆದುಕೊಳ್ಳಬೇಕಾಗಿದೆ. ಇದು ಸಾಧ್ಯವಾಗುವುದಾದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗಾದರೂ ಸುಧಾರಿಸುವುದು. ಇಲ್ಲದಿದ್ದರೆ ಅದೇ ರಾಗ ಅದೇ ಹಾಡು.

ಚುನಾವಣೆಗಳನ್ನು ಯಾವುದೋ ಕಾರಣಕ್ಕೂ ತಿರಸ್ಕರಿಸುವುದು ನಮ್ಮಿನ್ದಾಗುವ ಅಪರಾಧವೆ. ಸರಿಯಾದ ನೇತಾರರನ್ನು ಆರಿಸುವುದು, ನಮ್ಮ ವ್ಯಾಪ್ತಿಯಲ್ಲಿ ಎಲ್ಲ ಸರ್ಕಾರಿ ಯೋಜನೆಗಳು ಯೋಜನಾಬದ್ದವಾಗಿ ಜಾರಿಗೊಳ್ಳುವಂತೆ ನೋಡಿಕೊಂಡರೆ ಎಲ್ಲವೂ ಒಳ್ಳೆಯದಾಗುತ್ತದೆ. ಈ ಸಂಧರ್ಭದಲ್ಲಿ ನೊಂದ ಜೀವಗಳಿಗೆ ಸ್ವಲ್ಪವಾದರೂ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವೆ.

No comments: